|| ಆಪದರ್ಥೇ ಧನಂ ರಕ್ಷೇತ್ ಶ್ರೀಮತಾಂ ಆಪದಃ ಕುತಃ |
ಕದಾಚಿತ್ ಚಲತೇ ಲಕ್ಷ್ಮೀಃ ಸಂಚಯೋಪಿ ವಿನಶ್ಯತಿ ||
ಆಪತ್ಕಾಲದಲ್ಲಿ ಪ್ರಯೋಜನಕ್ಕೆ ಬರಲೆಂದು ಹಣವನ್ನು ಕೂಡಿಟ್ಟುಕೊಳ್ಳಬೇಕು. ಆದರೆ ಶ್ರೀಮಂತರಿಗೆ ಆಪತ್ಕಾಲ ಹೇಗೆ ತಾನೆ ಬರುವುದೆಂದು ಯೋಚಿಸಬಾರದು. ಲಕ್ಷ್ಮಿಯು ಚಂಚಲೆಯಾಗಿರುವುದರಿಂದ ಒಂದುವೇಳೆ ಆಕೆಯು ಹೊರಟುಹೋದರೆ? ಆಗ ಕೂಡಿಟ್ಟ ಹಣವೂ ಹೊರಟುಹೋಗುವುದಲ್ಲವೇ? ಆದರೂ ಹಣವನ್ನು ಸಂಗ್ರಹಿಸಿ ಇಡುವುದು ಒಳ್ಳೆಯದು, ಇದರಿಂದ ಆಪತ್ಕಾಲದಲ್ಲಿ ಸಾಲಮಾಡುವುದು ತಪ್ಪುತ್ತದೆ ಮತ್ತು ಬೇರೆಯವರ ಹಂಗು ಇರುವುದಿಲ್ಲ
