ಚಾಣಕ್ಯ ನೀತಿ, ಶ್ಲೋಕ- 2

**ಚಾಣಕ್ಯ ನೀತಿ**
ಮೊದಲನೆಯ ಅಧ್ಯಾಯ
ಶ್ಲೋಕ-2

|| ಅಧಿತ್ಯೇದಂ ಯಥಾ ಶಾಸ್ತ್ರಂ ನರೋ ಜಾನಾತಿ ಸತ್ತಮಃ |
ಧರ್ಮೋಪದೇಶವಿಖ್ಯಾತಂ ಕಾರ್ಯಕಾರ್ಯೇ ಶುಭಾಶುಭೇ ||

ಎಲ್ಲಾ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುವಂತೆಯೇ ಧರ್ಮೋಪದೇಶವನ್ನು ನೀಡುವ ಈ ನೀತಿಶಾಸ್ತ್ರವನ್ನೂ ಅಧ್ಯಯನ ಮಾಡಿದರೆ ಮನುಷ್ಯನು ಒಳ್ಳೆಯ ಕಾರ್ಯ, ಅಶುಭಕಾರ್ಯಗಳಲ್ಲಿ ಹಾಗೂ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ಯಾವುದನ್ನು ಮಾಡಿದರೆ ಅದು ಶುಭಪ್ರದವಾಗುವುದು ಎಂಬುದನ್ನು ತಿಳಿಯಬಹುದು.

ಚಾಣಕ್ಯ ನೀತಿ, ಶ್ಲೋಕ- 1

                              **ಚಾಣಕ್ಯ ನೀತಿ**
                          ಮೊದಲನೆಯ ಅಧ್ಯಾಯ
                                 *ಶ್ಲೋಕ- 1*

|| ಪ್ರಣಮ್ಯ ಶಿರಸಾ ವಿಷ್ಣುಂ ತ್ರೈಲೋಕ್ಯಾಧಿಪತಿಂ ಪ್ರಭುಮ್ |
ನಾನಾಶಾಸ್ತ್ರೋದ್ಧೃತಂ ವಕ್ಷ್ಯೇ ರಾಜನೀತಿಸಮುಚ್ಚಯಮ್ ||

ತ್ರಿಲೋಕಗಳಿಗೆ ಅಧಿಪತಿಯಾಗಿರುವ ಶ್ರೀ ಮಹಾವಿಷ್ಣುವಿಗೆ ತಲೆಬಾಗಿ ನಮಸ್ಕರಿಸಿ, ಅನೇಕ ಪ್ರಾಚೀನ ಶಾಸ್ತ್ರಗಳಿಂದ ಸಂಗ್ರಹಿಸಿ ತೆಗೆದ ರಾಜನೀತಿಯನ್ನು ತಿಳಿಸುವ ಸಂಗ್ರಹವನ್ನು ಈಗ ನಾನು ಹೇಳುವೆನು.
ರಾಜನೀತಿಯ ಪಂಡಿತನೂ, ವಿನಯವಂತನೂ ಆದ ಚಾಣಕ್ಯನು ಈ ಗ್ರಂಥದ ಆರಂಭದಲ್ಲಿ ಬ್ರಹ್ಮಾಂಡದ ನಾಯಕನಾದ ಶ್ರೀಮಹಾವಿಷ್ಣುವಿಗೆ ಭಕ್ತಿಯಿಂದ ನಮಸ್ಕರಿಸಿ ರಾಜನೀತಿಯನ್ನು ಹೇಳಲು ಆರಂಭಿಸಿದನು, ಪುರಾಣಗಳಿಂದ ಸಂಗ್ರಹಿಸಿದ ಶ್ಲೋಕಗಳ ಸಂಗ್ರಹದ ಮೂಲಕ ರಾಜನೀತಿಯನ್ನು ಹೇಳುತ್ತಿರುವುದಾಗಿ ಇಲ್ಲಿ ಸ್ಪಷ್ಟಪಡಿಸಿರುವನು.