**ಚಾಣಕ್ಯ ನೀತಿ**
ಮೊದಲನೆಯ ಅಧ್ಯಾಯ
ಶ್ಲೋಕ-2
|| ಅಧಿತ್ಯೇದಂ ಯಥಾ ಶಾಸ್ತ್ರಂ ನರೋ ಜಾನಾತಿ ಸತ್ತಮಃ |
ಧರ್ಮೋಪದೇಶವಿಖ್ಯಾತಂ ಕಾರ್ಯಕಾರ್ಯೇ ಶುಭಾಶುಭೇ ||
ಎಲ್ಲಾ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುವಂತೆಯೇ ಧರ್ಮೋಪದೇಶವನ್ನು ನೀಡುವ ಈ ನೀತಿಶಾಸ್ತ್ರವನ್ನೂ ಅಧ್ಯಯನ ಮಾಡಿದರೆ ಮನುಷ್ಯನು ಒಳ್ಳೆಯ ಕಾರ್ಯ, ಅಶುಭಕಾರ್ಯಗಳಲ್ಲಿ ಹಾಗೂ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ಯಾವುದನ್ನು ಮಾಡಿದರೆ ಅದು ಶುಭಪ್ರದವಾಗುವುದು ಎಂಬುದನ್ನು ತಿಳಿಯಬಹುದು.
